ಬಿಜೆಪಿಯ ಹಿರಿಯ ನಾಯಕ ಎಸ್ಎಂ ಕೃಷ್ಣ ನಿಧನರಾಗಿದ್ದಾರೆ. ಪ್ರಧಾನಿ ಹುದ್ದೆಯ ರೇಸ್ನಲ್ಲಿ ಕೂಡ ಇದ್ದರು, ಎಸ್ಎಂ ಕೃಷ್ಣ ರಾಜಕೀಯ ಜೀವನ ರಾಷ್ಟ್ರ ರಾಜಕಾರಣದಲ್ಲಿ ಅವರಿಗಿದ್ದ ಆಸಕ್ತಿ, ಅವರು ಅಲಂಕರಿಸಿದ್ದ ಹುದ್ದೆಗಳು ಸೇರಿದಂತೆ ಇತರೆ ಕುತೂಹಲಕಾರಿ ವಿಚಾರಗಳ ಕುರಿತು ಮಾಹಿತಿ ಇಲ್ಲಿದೆ. Click Here to Know more - Story Of SM Krishna – Life Journey of Village to White House ದೇವೇಗೌಡರು ಮೊದಲ ಕನ್ನಡಿಗ ಪ್ರಧಾನಿ ಎನಿಸಿಕೊಂಡವರು, ಇಂಥದ್ದೇ ಅವಕಾಶ ಎಸ್ಎಂ ಕೃಷ್ಣರಿಗೂ ಕೂಡ ಬಂದಿತ್ತು, ಆದರೆ 2004ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅಧಿಕಾರ ಕಳೆದುಕೊಂಡು ಕೇಂದ್ರದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾದಾಗ ಕಾಂಗ್ರೆಸ್ ಮುಂದೆ ಎರಡು ಅವಕಾಶಗಳಿತ್ತು. ಸೋನಿಯಾಗಾಂಧಿ ಪ್ರಧಾನಿ ಹುದ್ದೆಗೆ ಒಪ್ಪಲು ತಯಾರಿರಲಿಲ್ಲ. ಪ್ರಧಾನಿ ಹುದ್ದೆಯ ರೇಸ್ನಲ್ಲಿ ಮನಮೋಹನ್ ಸಿಂಗ್ ಜತೆಗೆ ಎಸ್ಎಂ ಕೃಷ್ಣ ಹೆಸರೂ ಮುನ್ನೆಲೆಗೆ ಬಂದಿತ್ತು. ಈ ವಿಚಾರವನ್ನು ಖುದ್ದು ಮನಮೋಹನ್ ಸಿಂಗ್ ಅವರೇ ಎಸ್ಎಂ ಕೃಷ್ಣ ಅವರಿಗೆ ತಿಳಿಸಿದ್ದರಂತೆ. ಇದನ್ನು ಅವ ಆತ್ಮಚರಿತ್ರೆಯಲ್ಲಿ ವಿವರಿಸಲಾಗಿದೆ.